ಮಂಗಲ್ಪಾಡಿ ಶಾಲೆಯಲ್ಲಿ'ಉಪಜಿಲ್ಲಾ ಶಾಲಾ ಪ್ರವೇಶೋತ್ಸವ' ಸಂಪನ್ನ
ಮಂಜೇಶ್ವರ ಉಪಜಿಲ್ಲಾ ಮಟ್ಟದ ಶಾಲಾ
ಪ್ರವೇಶೋತ್ಸವ ಮತ್ತು ಪ್ರೈಮರಿ ಶಾಲೆಯ ಎರಡು ಹವಾ ನಿಯಂತ್ರಿತ ಹೈ-ಟೆಕ್ ಸ್ಮಾರ್ಟ್ ತರಗತಿಗಳ ಉದ್ಘಾಟನಾ
ಸಮಾರಂಭವು ಜೂನ್ 1 ಶುಕ್ರವಾರ ದಂದು ಮಂಗಲ್ಪಾಡಿ ಕುಕ್ಕಾರ್ ಸರಕಾರಿ
ಶಾಲೆಯಲ್ಲಿ ಸಂಪನ್ನಗೊಂಡಿತು. ಹೊಸ ಅಧ್ಯಯನ ವರ್ಷಕ್ಕೆ
ನವಾಗತ ಪುಟಾಣಿಗಳನ್ನು ಪಂಚಾಯತ್ ಮತ್ತು ಉಪಜಿಲ್ಲಾ ವಿದ್ಯಾಧಿಕಾರಿಗಳ ನೇತೃತ್ವದಲ್ಲಿ
ವಾದ್ಯಮೇಳಗಳ ವರ್ಣರಂಜಿತ ಮೆರವಣಿಗೆಯೊಂದಿಗೆ ಬರಮಾಡಿಕೊಳ್ಳಲಾಯಿತು. ಶಾಲಾ ಹಿರಿಯ ಮಕ್ಕಳು ಮತ್ತು
ಶಿಕ್ಷಕರು ಸಿಹಿ ನೀಡಿ ಸ್ವಾಗತಿಸಿದರು. ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀ. ಶಾಹುಲ್ ಹಮೀದ್ ರ
ಅಧ್ಯಕ್ಷತೆಯಲ್ಲಿ ಮಂಜೇಶ್ವರ ಬ್ಲೋಕ್ ಪಂಚಾಯತ್ ಅಧ್ಯಕ್ಷ ಶ್ರೀ. ಎ.ಕೆ.ಎಂ ಅಶ್ರಫ್
ಉದ್ಘಾಟನೆಗೈದರು. ಮಕ್ಕಳಿಗಿರುವ ಉಚಿತ ಕಲಿಕಾ ಕಿಟ್, ಸಮವಸ್ತ್ರ ಸಮಾರಂಭದಲ್ಲಿ ವಿತರಿಸಲಾಯಿತು. ಮುಖ್ಯ ಶಿಕ್ಷಕಿ ರೇವತಿ.ಕೆ ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ಮಂಜೇಶ್ವರ ಬ್ಲೋಕ್ ಪಂಚಾಯತ್ ಚೇರ್.ಮ್ಯಾನ್ ಬಹರೈನ್ ಮೊಹಮ್ಮದ್, ಶ್ರೀ ಅಬ್ದುಲ್ ರಝಾಕ್, ಶ್ರೀಮತಿ ಅಯಿಷತ್ ಫಾರಿಜ, ಶ್ರೀಮತಿ ಸಂಗೀತ ಮೊಳ್, ಎ.ಇ.ಒ ಶ್ರೀ ದಿನೇಶ್ ವಿ, ಬಿ.ಪಿ.ಒ ಶ್ರೀ ವಿಜಯ್ ಕುಮಾರ್, ಶ್ರೀ ಮುಸ್ತಫಾ ಅಡ್ಕ ಹಾಗೂ ವಿವಿಧ ರಾಜಕೀಯ
ಪಕ್ಷದ ನೇತಾರರು ಹಾಜರಿದ್ದರು. ಹೈಸ್ಕೂಲ್ ಮುಖ್ಯ ಶಿಕ್ಷಕಿ ಶ್ರೀಮತಿ ಲತಾ .ಕೆ ವಂದಿಸಿದರು.